ಕಲಾವಿದರು ಯಕ್ಷಗಾನ ಕೃತಿ ಓದಬೇಕು: ಪ್ರೊ.ಸಾಮಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಡಿಸೆ೦ಬರ್ 19 , 2013
|
ಡಿಸೆ೦ಬರ್ 19, 2013
|
ಕಲಾವಿದರು ಯಕ್ಷಗಾನ ಕೃತಿ ಓದಬೇಕು: ಪ್ರೊ.ಸಾಮಗ
ಮಂಗಳೂರು :
ಯಕ್ಷಗಾನದ ಸಮಗ್ರ ನೋಟವನ್ನು ಒಳಗೊಂಡಿರುವ ಯಕ್ಷಗಂಗೋತ್ರಿ ಕೃತಿಯನ್ನು ಕಲಾವಿದರು ಓದಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಹೇಳಿದ್ದಾರೆ. ಸೋಮೇಶ್ವರ ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ 40ನೇ ವರ್ಧಂತ್ಯುತ್ಸವ ಸಲುವಾಗಿ ಬುಧವಾರ ನಗರದ ಪುರಭವನದಲ್ಲಿ 'ಯಕ್ಷಗಂಗೋತ್ರಿ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಕೃತಿಯಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ 32 ಲೇಖನಗಳಿವೆ. ಯಕ್ಷಗಾನ ಬೆಳವಣಿಗೆಯ ವಿಸ್ತಾರದ ಹಿಂದೆ ಹವ್ಯಾಸಿ ಯಕ್ಷಗಾನ ವರ್ಗ ಇದೆ. ಅವರೂ ಈ ಕೃತಿಯನ್ನು ಓದಬೇಕು. ಯಕ್ಷಗಾನ ಇನ್ನಷ್ಟು ಬೆಳೆಯಬೇಕಾದರೆ ಸೀಮೋಲ್ಲಂಘನ ಆಗಬೇಕು ಎಂದು ಆಶಿಸಿದರು. ಇದೇ ಸಂದರ್ಭ ಹಿರಿಯ ಹಾಸ್ಯಗಾರ ಮಿಜಾರು ಅಣ್ಣಪ್ಪ ಮತ್ತು ಹಿರಿಯ ಸ್ತ್ರೀಪಾತ್ರ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ರನ್ನು ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಕೇಂದ್ರ ನಿರ್ದೇಶಕ ಪ್ರೊ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಶುಭಾಶಂಸನೆ ಮಾಡಿದರು. ಕೇಂದ್ರದ ಅಧ್ಯಕ್ಷ ಪ್ರೊ.ಅಮೃತ ಸೋಮೇಶ್ವರ, ಕಾರ್ಯದರ್ಶಿ ಕೆ.ಸದಾಶಿವ, ಕೋಶಾಧಿಕಾರಿ ಬಾಬು ಜಿ.ಕೋಟೆಕಾರ್ ಹಾಜರಿದ್ದರು.
ಕೃಪೆ :
http://kannadaprabha.com
|
|
|